ಲೇಖನ ಹುಡುಕಿ

Friday, September 13, 2024

ಚಿರಯೌವನಕ್ಕಾಗಿ ೬ ಜೀವನಸೂತ್ರಗಳು. ಇವನ್ನು ನೀವು ಅನುಸರಿಸಿದರೆ ಜಗತ್ತಿನ ಸುರ - ಸುಂದರಿಯರಲ್ಲಿ ನೀವೂ ಒಬ್ಬರಾಗುತ್ತೀರಿ.

ವಯಸ್ಸು ಯಾರನ್ನೂ ಬಿಡುವುದಿಲ್ಲ. ದೇಹ ಮತ್ತು ಮನಸ್ಸು  ಕಾಲ ಚಲಿಸಿದಂತೆ ಮಾಗುತ್ತವೆ. ಇದು ಬದುಕಿನ ಸೌಂದರ್ಯ. ಈ ಸುಂದರ, ಸಹಜ ಮಾಗುವಿಕೆ ಮನಸ್ಸಿಗೆ ಮುದ ನೀಡುತ್ತದೆ. ಆದರೆ ಬಹಳ ಸಂದರ್ಭ ವಯಸ್ಸಿಗಿಂತ ಮೊದಲೇ ವಯಸ್ಸಾದಂತೆ ಕಾಣುತ್ತೇವೆ. ಇದನ್ನು ತಪ್ಪಿಸಲು ಕೆಲವು ಸರಳ ಸೂತ್ರಗಳನ್ನು ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಂಡರೆ ಮುಪ್ಪಿನ ಕಳೆ ಮೈ-ಮನಸ್ಸಿಗೆ ಬರದಂತೆ ನೋಡಿಕೊಳ್ಳಬಹುದು.

೧. ಆಹಾರ - ಪ್ರತಿದಿನ ಒಳ್ಳೆಯ ಗುಣಮಟ್ಟದ ಆಹಾರ ಸೇವಿಸುವುದು ಆರೋಗ್ಯಕ್ಕೆ ಅನುಕೂಲ. ಸಸ್ಯಾಹಾರಿಗಳಾಗಿದ್ದರೆ ದಿನಕ್ಕೆ ಒಂದು ಲೋಟ ಹಾಲು, ಒಂದು ಹಣ್ಣು, ಪಲ್ಯ, ಸೊಪ್ಪು, ತರಕಾರಿಗಳಿರುವ ರೊಟ್ಟಿ ಅಥವಾ ಮುದ್ದೆ ಊಟ, ಮೊಸರು/ಮಜ್ಜಿಗೆ ಸೇವಿಸಬೇಕು. ಮಾಂಸಾಹಾರಿಗಳಾಗಿದ್ದರೆ ಮೀನು, ಮೊಟ್ಟೆಗಳ ಜೊತೆಗೆ ಸಸ್ಯಾಹಾರವನ್ನೂ ಸೇರಿಸಿಕೊಂಡರೆ ದೇಹದ ವಯಸ್ಸಾಗುವಿಕೆ ನಿಧಾನವಾಗುತ್ತದೆ.

೨. ನೀರು - ಪ್ರತಿನಿತ್ಯ ೨ ಲೀ. ನೀರು ದೇಹಕ್ಕೆ ಬೇಕು. ಅದಕ್ಕಿಂತಲೂ ಬೆಳಿಗ್ಗೆ ಎದ್ದ ಕೂಡಲೇ ಖಾಲಿ ಹೊಟ್ಟೆಯಲ್ಲಿ , ಬಾಯಿ ತೊಳೆಯುವ ಮೊದಲು ಒಂದೆರಡು ಲೋಟ ನೀರು ಕುಡಿದರೆ ದೇಹದೊಳಗೆ ನಿರ್ಜಲವಾಗುವಿಕೆ ತಪ್ಪುತ್ತದೆ. ಚರ್ಮ ಸುಕ್ಕುಗಟ್ಟದೆ ಹೊಳಪಾಗಿರುತ್ತದೆ.

೩. ನಿದ್ದೆ - ಪ್ರತಿದಿನ ಕನಿಷ್ಠ ೫ - ೮ ಗಂಟೆಗಳ ಕಾಲ ಅವರವರ ಚಟುವಟಿಕೆ, ಅಭ್ಯಾಸಗಳಿಗೆ ತಕ್ಕಂತೆ ನಿದ್ದೆ ಮಾಡಬೇಕು. ಇದೂ ಸಹ ದೇಹದ ವಯಸ್ಸಾಗುವಿಕೆಯನ್ನು ನಿಯಂತ್ರಿಸುತ್ತದೆ. ಇದಕ್ಕಿಂತ ಕಡಿಮೆ ಅಥವಾ ಹೆಚ್ಚು ನಿದ್ದೆ ಮಾಡಿದರೆ ಬೇಗನೆ ವಯಸ್ಸಾಗುವುದು ಖಚಿತ.

೪. ಚಟುವಟಿಕೆ - ದೇಹ ಮತ್ತು ಮನಸ್ಸು ಎಷ್ಟು ರಚನಾತ್ಮಕವಾಗಿ ಚಟುವಟಿಕೆಯಿಂದ ಕೂಡಿರುತ್ತವೆಯೊ ಅಷ್ಟು ವಯಸ್ಸು ಕಡಿಮೆಯಾಗುತ್ತದೆ. ಮನೆಯ ಒಳ - ಹೊರಗೆ ಎಷ್ಟು ಪರಾವಲಂಬಿಗಳಾಗುತ್ತೀರಿ, ಎಷ್ಟು ಆರಾಮವಾಗಿರುತ್ತೀರಿ ಅಷ್ಟು ದೇಹದ ಅವಯವಗಳು ತಪ್ಪು ಸಂದೇಶ ಸ್ವೀಕರಿಸುತ್ತವೆ. ಆಕ್ಟಿಯೋಪರಿಕ್ಸ್ ತರಹ ದೇಹದ ಅಂಗಾಂಗಗಳು ತಾವು ನಿರುಪಯುಕ್ತ ಎಂದು ತೀರ್ಮಾನಿಸಿ ನಿಷ್ಕ್ರಿಯಗೊಳ್ಳತೊಡಗುತ್ತವೆ. ಆದ್ದರಿಂದ ದೇಹವನ್ನು ಚಟುವಟಿಕೆಯಿಂದ, ಚುರುಕಾಗಿ ಇಟ್ಟುಕೊಳ್ಳಬೇಕು.

೫. ಚಿಂತನೆ - ದೇಹಕ್ಕೂ , ಮನಸ್ಸಿಗೂ ಅವಿನಾಭಾವ ಸಂಬಂಧ. ಮನಸ್ಸು ಚಿಂತೆ ಮಾಡಬಾರದು. ಚಿಂತನೆ ಮಾಡಬೇಕು. ಜೀವನದ ಎಲ್ಲಾ ಆಗುಹೋಗುಗಳನ್ನು ಸಮಚಿತ್ತದಿಂದ ಎದುರಿಸಬೇಕು. ಧನಾತ್ಮಕವಾದ ಚಿಂತನೆ ಮಣಿಪೂರ ಚಕ್ರವನ್ನು ಸದೃಢವಾಗಿಡುತ್ತದೆ. ಜೀರ್ಣಕ್ರಿಯೆ ಚೆನ್ನಾಗಿ ಆಗಿ ದೇಹ ಹಗುರವಾಗಿ ಇರುತ್ತದೆ. ಅಸೂಯೆ, ಸಿಟ್ಟು, ದ್ವೇಷ ಮತ್ತು ಸ್ವಾನುಕಂಪದಿಂದ ಯಾವಾಗಲೂ ಒಂದು ದೂರವನ್ನು ಕಾಯ್ದುಕೊಳ್ಳಬೇಕು. ಇದರಿಂದ ಸಹ ದೇಹ ವಯಸ್ಸಾಗದೆ ಯೌವನದಿಂದ ಹೊಳೆಯುತ್ತಿರುತ್ತದೆ.

೬. ನಿಶ್ಚಿತ , ನಿರಂತರ, ನಿರುದ್ವೇಗ ಬದುಕು - ಆರ್ಥಿಕವಾಗಿ ನಿಶ್ಚಿತ ಆದಾಯ ಬರುವ, ನಿರಂತರವಾಗಿ ಮಾಡಲು ಕೆಲಸ ಇರುವ ಯಾವುದೇ ಉದ್ವೇಗ, ಗೊಂದಲಗಳಿಗೆ ಅವಕಾಶ ಇಲ್ಲದ ಜೀವನವನ್ನು ರೂಪಿಸಿಕೊಳ್ಳಿ. ಇದು ಮೊದಲ ೪ ಅಂಶಗಳನ್ನು ದಿನನಿತ್ಯ ಅಳವಡಿಸಿಕೊಳ್ಳಲು ಸಹಾಯ ಮಾಡುತ್ತದೆ. 


ಜಗತ್ತಿನ ಸುರ-ಸುಂದರಿಯರೆಲ್ಲರ ಸೌಂದರ್ಯದ ಗುಟ್ಟು ತೆಗೆದಾಗ ಈ ೬ ಅಂಶಗಳನ್ನು ಸಾಮಾನ್ಯವೆಂದು ಗುರುತಿಸಲಾಗಿದೆ. ನೀವೂ ಈ ಸೂತ್ರಗಳನ್ನು ಅನುಸರಿಸಿ,  ಚಿರಯೌವನಿಗರಾಗಿ. 

ನಾಗಮಂಗಲದ ಗಲಭೆಯಲ್ಲಿ ತಪ್ಪು ಯಾರದ್ದು?


            

ಸಪ್ಟೆಂಬರ್ ೧೦ರ ರಾತ್ರಿ ನಾಗಮಂಗಲ ಪಟ್ಟಣದಲ್ಲಿ ೨೫ ಅಂಗಡಿಗಳು ಭಸ್ಮವಾದವು. ಕೋಟ್ಯಾಂತರ ರೂ.ನಷ್ಟವಾಯಿತು. ೨೦೨೪ ಗಣೇಶೋತ್ಸವ ಕಹಿ ನೆನಪಿನೊಂದಿಗೆ ಕೊನೆಗೊಂಡಿತು. ಮುಖ್ಯ ಮಾಧ್ಯಮಗಳಲ್ಲಿ ಆಡಳಿತಾರೂಢ ಮತ್ತು ವಿರೋಧ ಪಕ್ಷಗಳ ವಾಗ್ವಿವಾದ ತಾರಕಕ್ಕೇರಿತು. ಮನೆಯಲ್ಲಿ ಕುಳಿತು ಇವನ್ನೆಲ್ಲ ನೋಡುತ್ತಿದ್ದ ವೀಕ್ಷಕ ಮಾತ್ರ ಗಲಭೆ ಹೇಗಾಯಿತು? ಯಾರ ತಪ್ಪು ಎಂಬ ಗೊಂದಲದಲ್ಲಿದ್ದುದು ಸುಳ್ಳಲ್ಲ. ಹಿಂದೂಗಳು, ಮುಸಲ್ಮಾನರು ಎಂಬ ಪೂರ್ವಾಗ್ರಹದಲ್ಲಿದ್ದ ಸಮಾಜದ ಎಲ್ಲಾ ವರ್ಗದವರು ಈ ಸಂದರ್ಭವನ್ನು ತಮಗೆ ಬೇಕಾದ ಹಾಗೆ ತೆಗೆದುಕೊಂಡರು. 

            ಇಷ್ಟಕ್ಕೂ ನಾಗಮಂಗಲದ ಗಲಭೆ ಹೊಸತೇನಲ್ಲ. ಸಮಾಜದಲ್ಲಿ ಕೋಮು ಮತ್ತು ಶಾಂತಿ ಸೌಹಾರ್ದ ಕೆಡಿಸುವ ಘಟನೆಗಳು ಎಲ್ಲಾ ಕಾಲಕ್ಕೂ ನಡೆದಿವೆ. ನಡೆಯುತ್ತವೆ, ನಡೆಯಲಿವೆ. ಇಲ್ಲಿ ಪ್ರಶ್ನೆ ಏಳುವುದು ಕಾರಣ ಮತ್ತು ಕಾರಣಕರ್ತರ ಬಗ್ಗೆ ಮಾತ್ರ.

            ನಾಯಕನ್ ಸಿನಿಮಾ ನೆನಪಾದರೆ ಆಶ್ಚರ್ಯವಿಲ್ಲ. ಗಲಭೆಯಿಂದ ಲಾಭ ಯಾರಿಗೆ? ಎಂಬ ಪ್ರಶ್ನೆ ಎತ್ತಿದಾಗ ಗಲಭೆಯ ದೋಷಣೆ ಹೊರಿಸಲು ಸಾಧ್ಯವಾಗಿದ್ದು, ಆಡಳಿತಾರೂಢ ಸರ್ಕಾರಕ್ಕೆ ಆರೋಪ ಬಂದಿದ್ದು ಎಲ್ಲಾ ಲಾಭವಾಗಿದ್ದು ವಿರೋಧಪಕ್ಷಕ್ಕೆ. ಜೊತೆಗೆ ಗಲಭೆಯಲ್ಲಿ ಹಾನಿಗೊಂಡ ಬಹುತೇಕ ಅಂಗಡಿಗಳು ಮುಸ್ಲಿಂ ಕೋಮಿಗೆ ಸೇರಿದ್ದು ಇನ್ನೊಂದು ಸಂಶಯಕ್ಕೆ ಕಾರಣ.

            ಗಣೇಶೋತ್ಸವದ ಮೆರವಣಿಗೆ ಮಸೀದಿಯ ಬಳಿಗೆ ಹೋಗುವುದು, ಅಲ್ಲಿ ಹೋದ ಮೇಲೆ ಜೈಶ್ರೀರಾಂ ಎಂದು ಕೂಗಿ ಪ್ರಚೋದಿಸುವುದು, ಅದಾಗಲೇ ಕಾದಿದ್ದಂತೆ ಇನ್ನೊಂದು ಗುಂಪು ಕಲ್ಲು ತೂರಾಟ ಮಾಡುವುದು ಇವೆಲ್ಲವೂ ಅವತ್ತಿನ ಘಟನೆ ಪೂರ್ವ ನಿಯೋಜಿತ ಯೋಜನೆಯೇ? ಎಂಬುದಕ್ಕೆ ಪೂರಕವಾಗಿವೆ. ಅಷ್ಟಲ್ಲದೆ, ಪೊಲೀಸ್ ವ್ಯವಸ್ಥೆ ಸರಿಯಾಗಿಲ್ಲದೆ ಅಶ್ರುವಾಯು ಸಿಡಿಸಿದ್ದು, ರಾತ್ರೋ ರಾತ್ರಿ ಅಂಗಡಿಗಳಿಗೆ ನುಗ್ಗಿ ನಾಶ ಮಾಡಿದ್ದು ಇವೆಲ್ಲವೂ ಮೊದಲೇ ಬರೆದ ನಾಟಕದ ದೃಶ್ಯಗಳೇನೋ ಎನಿಸುತ್ತವೆ. 

            ಪ್ರಕರಣದ ತನಿಖೆಯ ಭಾಗವಾಗಿ ಗುಂಪಿನಲ್ಲಿ ಬಂದ ೫೦ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ. ಆದರೆ ಆ ಪಾಲಕರು/ಪೋಷಕರು ತಮ್ಮ ಮಕ್ಕಳು ಅಮಾಯಕರು, ನಿರಪರಾಧಿಗಳು ಎಂದು ಹೇಳಿಕೆ ಕೊಡುತ್ತಿದ್ದಾರೆ. ಮನೆಯ ಹೊರಗೆ ಹೋಗುವ ಗಂಡು ಮಕ್ಕಳು ಏನು ಕೆಲ್ಸ ಮಾಡುತ್ತಾರೆ? ಯಾರೊಂದಿಗೆ ಬೆರೆಯುತ್ತಾರೆ ಎಂಬ ಖಬರಿಲ್ಲದ ಪೋಷಕರು ತಮ್ಮ ಮಕ್ಕಳು ಅಮಾಯಕರೆಂದು ಹೇಗೆ ನಂಬುತ್ತಾರೆ? ಇದೂ ವ್ಯವಸ್ಥಿತ ಸಂಚಿನ ಒಂದು ಭಾಗವೇ? ಎಂಬೆಲ್ಲ ಪ್ರಶ್ನೆಗಳನ್ನು ಮೂಡಿಸುತ್ತವೆ.

            ಅದಾಗಲೇ ಶಾಲೆಗಳಲ್ಲಿ ಪೋಷಕರು ಮಕ್ಕಳಲ್ಲಿ ಜಾತಿ, ಕೋಮು, ಆಹಾರದ ವಿಷಯಗಳಲ್ಲಿ ಗೇಲಿ ಮಾಡುವುದು, ತಾರತಮ್ಯ ಮಾಡುವುದು ಮತ್ತು ಪಕ್ಷಪಾತ ಧೋರಣೆಯನ್ನು ಹೊಂದುವುದು ಕಲಿಸಿ ಕಳಿಸುತ್ತಿದ್ದಾರೆ. ಅವರು ದೊಡ್ಡವರಾಗಿ ಈ ರೀತಿಯ ಸಮಾಜ ಘಾತುಕ ಚಟುವಟಿಕೆಯಲ್ಲಿ ತೊಡಗಲಾರರು ಎಂದು ಯಾರಾದರೂ ಹೇಳಬಹುದೆ? 

            ನಾಗಮಂಗಲದ ಘಟನೆ ಎಲ್ಲಿ, ಯಾವಾಗ ಬೇಕಾದರೂ ನಡೆಯಬಹುದು. ಪೋಷಕರು , ಮಕ್ಕಳು ಎಚ್ಚೆತ್ತು ಕೊಂಡು ರಾಜಕೀಯ ಕುತಂತ್ರಗಳಿಗೆ ತಮ್ಮನ್ನು ಬಲಿಕೊಡದಂತೆ ತಮ್ಮನ್ನು ತಾವೇ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಅದು ಭವಿಷ್ಯದಲ್ಲಿ ಇಂತಹ ದುರ್ಘಟನೆ ನಡೆಯದಂತೆ ನೋಡಿಕೊಳ್ಳಲು ಅತ್ಯವಶ್ಯಕ.

 

ದರ್ಶನ್ ಮತ್ತು ಪವಿತ್ರಾ ಸಂಬಂಧ ಎಷ್ಟು ದಿನ ಬಾಳುತ್ತದೆ?


  
ದರ್ಶನ್ ಮತ್ತು ಪವಿತ್ರಾ ಸಂಬಂಧ ಎಷ್ಟು ದಿನ ಬಾಳುತ್ತದೆ?

            ಇಂತಹದ್ದೊಂದು ಪ್ರಶ್ನೆ ಈಗ ದರ್ಶನ್ ಮತ್ತು ಪವಿತ್ರಾ ಅಭಿಮಾನಿಗಳಲ್ಲಿ ಮೂಡತೊಡಗಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಅದಾಗಲೇ ಜೈಲು ಸೇರಿರುವ ಇಬ್ಬರ ಮಧ್ಯೆ ದೂರ ಬಂದಾಗಿದೆ. ಪರಪ್ಪನ ಅಗ್ರಹಾರದಲ್ಲಿ ಒಂದೇ ಜೈಲಿನಲ್ಲಿ ಇದ್ದೀವೆಂಬ ಭಾವನೆಯಾದರೂ ಇತ್ತು. ಆದರೀಗ ದೂರದ ಬಳ್ಳಾರಿ ಜೈಲಿಗೆ ದರ್ಶನ್ ವರ್ಗಾವಣೆಯಾದ ನಂತರ ಪವಿತ್ರಾ ಈಗ ಒಬ್ಬಂಟಿಯಾಗಿದ್ದಾರೆ. ಅತ್ತ ಜೈಲಿಗೆ ಪತ್ನಿಯನ್ನು ಕರೆಸಿಕೊಳ್ಳುತ್ತಿರುವ ದರ್ಶನ್ ಇತ್ತ ಪ್ರೇಯಸಿಯ ದುಃಖವನ್ನು ಹೆಚ್ಚು ಮಾಡುತ್ತಿರುವುದಂತೂ ಸತ್ಯವಾಗಿದೆ.

              ಪವಿತ್ರಾ ಹೇಳಿಕೆಯ ಪ್ರಕಾರ ದರ್ಶನ್ ಮತ್ತು ಪವಿತ್ರಾ ಫೆಬ್ರವರಿಯಲ್ಲಿ ಜಗಳವಾಡಿ ದೂರವೇ ಇದ್ದಾರೆ. ದರ್ಶನ್ ವಿವಾಹ ವಾರ್ಷಿಕೋತ್ಸವವನ್ನು ಪತ್ನಿಯೊಂದಿಗೆ ಆಚರಿಸಿಕೊಂಡಿದ್ದು ಪವಿತ್ರಾರನ್ನು ಕೆರಳಿಸಿತ್ತು. ಆ ನಂತರ ತಮ್ಮ ಮತ್ತು ದರ್ಶನ್ ಸಂಬಂಧವನ್ನು ಹೊರಹಾಕಲು ಇನ್ಸ್ಟಾ ಖಾತೆಯನ್ನು ಪವಿತ್ರಾ ಬಳಸಿಕೊಂಡಿದ್ದರು. ಇದಕ್ಕೆ ವಿಜಯಲಕ್ಷ್ಮಿ ಸರಿಯಾಗಿಯೇ ಉತ್ತರ ಕೊಟ್ಟಿದ್ದರು. ಇವರಿಬ್ಬರ ಜಗಳವನ್ನು ನೋಡಿ ವಿಜಯಲಕ್ಷ್ಮಿ ಪರ ನಿಂತಿದ್ದ ರೇಣುಕಾಸ್ವಾಮಿ. ದರ್ಶನ್ ರಿಂದ ಪವಿತ್ರಾರನ್ನು ದೂರ ಮಾಡಲು ತನ್ನದೇ ಆಟವಾಡಿದ್ದ ರೇಣುಕಾಸ್ವಾಮಿ ಕೊನೆಗೆ ಮಸಣ ಸೇರಿದ್ದ. 

            ಪತ್ನಿ ಮತ್ತು ಪ್ರೇಯಸಿಯ ನಡುವೆ ಹೈರಾಣಾಗಿದ್ದ ದರ್ಶನ್ ಪ್ರೇಯಸಿಯ ಮೇಲಿನ ಪ್ರೀತಿಯನ್ನು ಸಾಬೀತು ಮಾಡಲು ಕೊಲೆ ಮಾಡಿದರಾ? / ಮಾಡಿಸಿದರಾ?ಎನ್ನುವ ಪ್ರಶ್ನೆಯೂ ಇದೆ.  ಜೊತೆಗೆ ಅದಾಗಲೇ ಬಿಪಿ, ಸಕ್ಕರೆ ಕಾಯಿಲೆಗಳಿಂದ ಬಳಲುತ್ತಿದ್ದ ದರ್ಶನ್ ಪ್ರೇಯಸಿಯನ್ನು ತೃಪ್ತಿಪಡಿಸಲಾಗದ ತಲ್ಲಣದಲ್ಲಿದ್ದರಾ? ಆ ತಲ್ಲಣವೇ ರೇಣುಕಾಸ್ವಾಮಿಯ ಗುಪ್ತಾಂಗದ ಫೋಟೊ/ವಿಡಿಯೊ ನೋಡಿದ ಕೂಡಲೇ ಕೊಲೆ ಮಾಡುವಷ್ಟು ಕೆರಳಲು ಕಾರಣವಾಯಿತಾ? ಎಲ್ಲದಕ್ಕೂ ಖುದ್ದು ದರ್ಶನ್ ಉತ್ತರ ಹೇಳಬೇಕಷ್ಟೆ.

            ಕಾನೂನಾತ್ಮಕವಾಗಿ ಇನ್ನೂ ಪತ್ನಿಯಾಗಿರುವ ವಿಜಯಲಕ್ಷ್ಮಿ ದರ್ಶನ್ ಜೊತೆಗೆ ನಿಲ್ಲಬೇಕಾಗಿರುವುದು ಅನಿವಾರ್ಯವಾಗಿದೆ. ಗಂಡ ಜೈಲಿನಲ್ಲಿರುವಾಗ ಖಾಸಗಿ ಔತಣಕೂಟಕ್ಕೆ ಹೋಗಿರುವ ವಿಜಯಲಕ್ಷ್ಮಿ ಬಗ್ಗೆ ಅಭಿಮಾನಿಗಳಲ್ಲಿ ಅನುಮಾನ ಮೂಡಿಸತೊಡಗಿದೆ. ಆದಾಗ್ಯೂ ಗಂಡ ಜೈಲಿಗೆ ಹೋದಾಗ ಹೆಂಡತಿ ತನ್ನ ಬದುಕನ್ನು ಬದುಕಲು ಹಕ್ಕಿಲ್ಲವೆ? ಎಂಬ ಪ್ರಶ್ನೆಯೂ ಇದೆ. ೨೦೧೩ರ ದಾಂಪತ್ಯ ಕಲಹ ಮತ್ತು ಜೈಲುವಾಸದ ನಂತರ ದರ್ಶನ್ ಪತ್ನಿಯಿಂದ ವಿಮುಖರಾಗಿ ಪವಿತ್ರಾ ಸೆರಗು ಸೇರಿದ್ದರು. ೧೧ ವರ್ಷಗಳಾದರೂ ವಿಜಯಲಕ್ಷ್ಮಿ ಮಗನಿಗಾಗಿ, ಸ್ಥಾನ ಮಾನಕ್ಕಾಗಿ ಪತ್ನಿ ಸ್ಥಾನ ಬಿಟ್ಟುಕೊಟ್ಟಿರಲಿಲ್ಲ. ದರ್ಶನ್ ಜೈಲುಪಾಲಾಗಿರುವ ಈ ಸಂದರ್ಭದಲ್ಲಿ ಮನೆ, ಕಾನೂನು ಎಲ್ಲಾ ನಿಭಾಯಿಸುವ ಜೊತೆಗೆ ಗಂಡನ ಭಾವನಾತ್ಮಕ ಬೆಂಬಲಕ್ಕೂ ನಿಲ್ಲಬೇಕಿದೆ. ಈ ಅಗ್ನಿಪರೀಕ್ಷೆಯ ಸನ್ನಿವೇಶ ಮಾಜಿ ಪತಿ-ಪತ್ನಿಯನ್ನು ಮತ್ತೆ ಒಂದು ಮಾಡಿದರೂ ಆಶ್ಚರ್ಯವಿಲ್ಲ.  



            ಇವೆಲ್ಲದರ ನಡುವೆ ಸಾಮಾಜಿಕ ಬೆಂಬಲವಿಲ್ಲದ, ಕಾನೂನು ಹೋರಾಟದಲ್ಲೂ ಒಂಟಿಯಾಗಿರುವ ಪವಿತ್ರಾ ದರ್ಶನ್ ಸಾಂಗತ್ಯವನ್ನು ಮುಂದುವರೆಸುತ್ತಾರಾ? ಪತ್ನಿ ಪ್ರೇಮ, ಕುಟುಂಬ, ಇಂಡಸ್ಟ್ರಿ, ಸಮಾಜ, ಕಾನೂನು, ಅಭಿಮಾನಿಗಳು ಇವುಗಳ ನಡುವೆ ದರ್ಶನ್ ನಿಜವಾಗಿಯೂ ಪವಿತ್ರಾ ಜೊತೆಗೆ ನಿಲ್ಲುತ್ತಾರಾ?ಸಮಯವೇ ಉತ್ತರ ಹೇಳಬೇಕು.

            ನ್ಯಾಯಾಲಯದಲ್ಲಿ ಇನ್ನೂ ವಿಚಾರಣೆ ಆರಂಭವಾಗುವ ಹಂತದಲ್ಲಿದೆ. ವಿಚಾರಣೆ ಮುಗಿದು ಶಿಕ್ಷೆ ಪ್ರಕಟವಾಗುವ ಹೊತ್ತಿಗೆ ದರ್ಶನ್ - ಪವಿತ್ರಾ ಯುಗಳಗೀತೆಗೂ ಒಂದು ಕ್ಲೈಮ್ಯಾಕ್ಸ್ ದೊರೆಯಲಿದೆ. 


ಉಣಲಿರದಿರುವವರ ನಡುವೆ ಉಣಲಿರುವವರ ಒಣ ರಾಜಕೀಯ

 ಇತ್ತೀಚೆಗೆ ನಟಿ ಲಕ್ಷ್ಮಿ ಅವರ ಮಾತು ಬಹಳ ಚರ್ಚೆಗೆ ಕಾರಣವಾಗಿದೆ. ಸ್ನೇಹಿತೆಯೊಬ್ಬಳು ತಲೆಗೆ ಬಣ್ಣವನ್ನೂ ಹಾಕದೆ ಬಹಳ ಹೀನಾಯ ಸ್ಥಿತಿಯಲ್ಲಿ ತನ್ನನ್ನು ನೋಡಲು ಬಂದಿದ್ದರು...